tag:blogger.com,1999:blog-6219880715879037434.post7192106479813331441..comments2012-12-15T08:02:25.179+05:30Comments on ಭಗವದ್ಗೀತಾ ವಿಚಾರ ಲಹರಿ: ಸೇನಯೋರುಭಯೋರ್ಮಧ್ಯೇ...Manjunatha Kollegalahttp://www.blogger.com/profile/06597757236883289208noreply@blogger.comBlogger11125tag:blogger.com,1999:blog-6219880715879037434.post-65053195729267555262010-09-16T06:39:02.081+05:302010-09-16T06:39:02.081+05:30ಒಳ್ಳೆಯ ಹಾಗೂ ಮೌಲಿಕ ಲೇಖನಗಳಿಗೆ, ಕೃತಿಗಳಿಗೆ ಪ್ರತಿಕ್ರಿಯೆ...ಒಳ್ಳೆಯ ಹಾಗೂ ಮೌಲಿಕ ಲೇಖನಗಳಿಗೆ, ಕೃತಿಗಳಿಗೆ ಪ್ರತಿಕ್ರಿಯೆ ಕಮ್ಮಿಯೇ ಇರುತ್ತದೆ, ಒಂದು --ಕೆಲವರು ಆ ತರಹದ ಓದನ್ನು ಸದಾ ಇಷ್ಟಪಡುವುದಿಲ್ಲ, ಎರಡ್ನೇ ಕಾರಣ-ಕೆಲವರಿಗೆ ಇನ್ನೂ ರಾಮಾಯಣ, ಮಹಾಭಾರತ, ಗೀತೆ ಇವೆಲ್ಲವನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ[ಇದಕ್ಕೆ ಕಾರಣ ಅಸಡ್ಡೆಯೂ ಇರಬಹುದು]. ಹೀಗಾಗಿ ನಿಮ್ಮಂತಹ ವಿಚಾರವಂತ ಲೇಖಕರು ಅವರನ್ನು ನೋಡಿ ಬರೆಯುವ ಅವಶ್ಯಕತೆಯಿಲ್ಲ, ನೀವು ಬರೆಯಿರಿ, ನಾವೆಲ್ಲಾ ಇದ್ದೇವಲ್ಲ- ನಿದ್ದೆ ಬಿಟ್ಟಾದರೂ ಓದುತ್ತೇವೆ, ನಮಗೆ ಓದು,ಬರಹದ ಗೀಳು ಅಷ್ಟಿಷ್ಟಲ್ಲ! ಹೀಗಾಗಿ ಹಿಂದೆ ನಾನು ಪ್ರತಿಕ್ರಿಸಿದ್ದಕ್ಕೆ ನೀವು ಸ್ಪಂದಿಸಿರದ ಕಾರಣ ಹಾಗೆ ಬರೆದಿದ್ದೆ, ಅದಕ್ಕಾಗಿ ಬೇಸರಿಸಬೇಡಿ,ವೇಗದಲ್ಲೇ ಬರೆಯಿರಿ,ನಮ್ಮ ಜೀವಿತದಲ್ಲಿ ಆದಷ್ಟೂ ಹೆಚ್ಚಿನ ಹಾಗೂ ಸಕಾಲಿಕ,ಉತ್ತಮ ಬರಹಗಳು ಬಹಳ ಬರಲಿ ಎನ್ನುವುದು ನನ್ನ ಆಶಯ, [ನಾವು ನಮ್ಮಲ್ಲಿ ಶ್ರೀಮದ್ಭಾಗವತದ ಹಲವು ಕಥೆಗಳನ್ನು ಯಕ್ಷಗಾನದ ರೂಪದಲ್ಲಿ ನೋಡಿತಿಳಿದದ್ದರಿಂದ ಅದು ಮನದಲ್ಲಿ ಅಚ್ಚಾಗಿ ಬಿಟ್ಟಿದೆ, ಆದರೆ ಬಹುತೇಕರಿಗೆ ಅದಿನ್ನೂ ದೂರದ ವಿಷಯ] ಬನ್ನಿ ನಮ್ಮಲ್ಲಿರುವುವುದನ್ನು ಹಂಚಿಕೊಳ್ಳೋಣ, ನಿಮಗೆ ಸದಾ ಸ್ವಾಗತ ಹಾಗೂ ಅಭಿನಂದನೆಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-6219880715879037434.post-12072834381844488932010-09-15T23:55:09.691+05:302010-09-15T23:55:09.691+05:30ಧನ್ಯವಾದ ನಮನ ಅವರೆ, ಗೀತಾವಿಚಾರಲಹರಿಗೆ ತಮಗೆ ಸ್ವಾಗತ. ಬರ...ಧನ್ಯವಾದ ನಮನ ಅವರೆ, ಗೀತಾವಿಚಾರಲಹರಿಗೆ ತಮಗೆ ಸ್ವಾಗತ. ಬರುತ್ತಿರಿ.<br /><br />ಭಟ್ಟರೇ, ಮೊದಲಿಗೆ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. "ಕೆಲವೊಮ್ಮೆ ಪ್ರತಿಕ್ರಿಯೆಗೆ ಸ್ಪಂದನ ಕೂಡ ಕಾಣಿಸಲಿಲ್ಲ" - ಆಶ್ಚರ್ಯ! ನನ್ನ ಎಲ್ಲಾ ಬ್ಲಾಗುಗಳ ಬಹುತೇಕ ಎಲ್ಲಾ ಪ್ರತಿಕ್ರಿಯೆಗಳಿಗೂ ಸ್ಪಂದಿಸಿದ್ದೇನಲ್ಲ! ಅದರಲ್ಲೂ ಬರುವುದೇ ಅಲ್ಲೊಂದು ಇಲ್ಲೊಂದು ಪ್ರತಿಕ್ರಿಯೆಯಾದ್ದರಿಂದ ಅವುಗಳಿಗೆ ಸ್ಪಂದಿಸಲು ಸಮಯದ ಅಭಾವವೇನೂ ಕಾಣದು :)<br /><br />ಇರಲಿ, ನಿಮ್ಮ ಎರಡನೆಯ ಮಾತಂತೂ ನಿಜ. ಎದ್ದು ತುಸು ಬ್ಲಾಗು ಸುತ್ತಾಡುವಷ್ಟೂ ಚಟುವಟಿಕೆಯಿಲ್ಲದ ಸೋಮಾರಿತನ ನನ್ನಲ್ಲಿ ಮನೆಮಾಡಿರುವುದಂತೂ ನಿಜ :) ಜೊತೆಗೆ ವಿಪರೀತ ಸಮಯದ ಒತ್ತಡವೂ! ತಮ್ಮ ಈ ಮಾತು ಅದಕ್ಕೆ ಮದ್ದು. <br /><br />ಹಾಗಂತ ನಾನು ಸುತ್ತಾಡುವುದೇ ಇಲ್ಲವೆಂದೇನು ಇಲ್ಲ. ಆದರೆ ನಾನು ಓದುವುದಕ್ಕಿಂದ ಓದಬೇಕೆಂದು ಪಟ್ಟಿಮಾಡಿಟ್ಟುಕೊಳ್ಳುವುದೇ ಹೆಚ್ಚು.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-6219880715879037434.post-44546336904095338942010-09-15T18:36:29.142+05:302010-09-15T18:36:29.142+05:30Nice !ನೀವೇ ಸ್ವತಃ ಬ್ಲಾಗಿಗರದರೂ ಬ್ಲಾಗಿಗರ ಬಗ್ಗೆ ತಮ್ಮಲ್...Nice !ನೀವೇ ಸ್ವತಃ ಬ್ಲಾಗಿಗರದರೂ ಬ್ಲಾಗಿಗರ ಬಗ್ಗೆ ತಮ್ಮಲ್ಲಿ ಯಾವ ಭಾವನೆ ಇದೆ ಎಂದು ತಿಳಿಯುತ್ತಿಲ್ಲ! ಕೆಲವೊಮ್ಮೆ ಪ್ರತಿಕ್ರಿಯೆಗೆ ಸ್ಪಂದನ ಕೂಡ ಕಾಣಿಸಲಿಲ್ಲ,ನಿಮಗೆ ಸಮಯ ಸಿಗುವುದೋ ಇಲ್ಲವೋ ಅದು ಬೇರೇ ವಿಚಾರ, ಆದರೆ ಕೆಲವಾರು ಬ್ಲಾಗನ್ನು ನೀವೂ ಆಗಾಗ ಸುತ್ತಿದರೆ ನಿಮ್ಮ ಸದಭಿರುಚಿಯ ಲೇಖನಗಳ ಸರಮಾಲೆ ಎಲ್ಲರಿಗೂ ರುಚಿಸೀತು, ನಿಮ್ಮ ಸಹಬ್ಲಾಗಿಗರಾದ ಸುಧೀಂಧ್ರರು ಸುಮಾರಾಗಿ ಎಲ್ಲಾ ಬ್ಲಾಗಿಗೂ ಭೇಟಿ ಇತ್ತಿದ್ದಾರೆ. ಇದು ನನ್ನ ವೈಯಕ್ತಿಕ ಅನಿಸಿಕೆ, ಸ್ವೀಕೃತವೋ ತಿರಸ್ಕೃತವೋ ನಿಮಗೇ ಬಿಟ್ಟಿದ್ದು. ಧನ್ಯವಾದV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-6219880715879037434.post-51135663726573161602010-09-15T14:31:19.645+05:302010-09-15T14:31:19.645+05:30ನಮಸ್ತೆ,
ಮೊದಲ ಬಾರಿಗೆ ಭೇಟಿ ನಿಮ್ಮ ಬ್ಲಾಗಿಗೆ.ತುಂಬ ಚೆನ್ನ...ನಮಸ್ತೆ,<br />ಮೊದಲ ಬಾರಿಗೆ ಭೇಟಿ ನಿಮ್ಮ ಬ್ಲಾಗಿಗೆ.ತುಂಬ ಚೆನ್ನಾಗಿದೆ.ವಿಜಯಕರ್ನಾಟಕದ ವೆಬ್ಬಾಗಿಲು ಅಂಕಣದಲ್ಲಿ ಈ ದಿನ. http://www.vijaykarnatakaepaper.com/svww_zoomart.php?Artname=20100915l_002101008&ileft=757&itop=547&zoomRatio=130&AN=20100915l_002101008* ನಮನ *https://www.blogger.com/profile/17908439223197502960noreply@blogger.comtag:blogger.com,1999:blog-6219880715879037434.post-23612100846949348802010-09-08T02:28:56.937+05:302010-09-08T02:28:56.937+05:30ನಮಸ್ಕಾರ ಶ್ಯಾಮಲಾ ಅವರೆ, ಗೀತೆಯನ್ನು ಅರ್ಥೈಸಿಕೊಳ್ಳಲು ಈ ಬ...ನಮಸ್ಕಾರ ಶ್ಯಾಮಲಾ ಅವರೆ, ಗೀತೆಯನ್ನು ಅರ್ಥೈಸಿಕೊಳ್ಳಲು ಈ ಬರಹಗಳು ಎಷ್ಟು ಸಹಾಯ ಮಾಡುತ್ತವೋ ತಿಳಿಯದು. ಈ ಬ್ಲಾಗಿನ ಪೀಠಿಕೆಯಲ್ಲಿ ಹೇಳಿದಂತೆ, ನನ್ನ ಗೀತಾ ವಿಚಾರಲಹರಿ ಕೇವಲ ವಿಚಾರ ಲಹರಿಯಷ್ಟೇ. ನನ್ನದೇ ಓದಿನ ದಾರಿಯಲ್ಲಿ ಮನಸ್ಸಿನಲ್ಲಿ ಮೂಡಿದ ವಿಚಾರಗಳನ್ನು ದಾಖಲಿಸುವುದಷ್ಟೇ ಇದರ ಉದ್ದೇಶ. ಗೀತೆಯ ಅಧ್ಯಯನ ನಿಜಕ್ಕೂ ಜ್ಞಾನಕಾರಿ ಅನ್ನುವುದೇನೋ ನಿಜ. ನಿಮ್ಮ ಆಸಕ್ತಿ ಇದು ಸ್ಫೂರ್ತಿನೀಡಿದರೆ ಅದು ಸಂತೋಷದ ವಿಷಯManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-6219880715879037434.post-69998857331296017332010-09-08T02:21:57.972+05:302010-09-08T02:21:57.972+05:30ಧನ್ಯವಾದಗಳು ಶಾಮಲ ಅವರೇ, ಹೌದು, ತುಮುಲ ನರನಿಗಷ್ಟೇ ಹೊರತು ...ಧನ್ಯವಾದಗಳು ಶಾಮಲ ಅವರೇ, ಹೌದು, ತುಮುಲ ನರನಿಗಷ್ಟೇ ಹೊರತು ನಾರಾಯಣನಿಗಲ್ಲವಲ್ಲ. ಅನಾದಿಕಾಲದಿಂದಲೂ ಮಾನವನಲ್ಲಿ ನಡೆಯುತ್ತಲೇ ಬಂದಿರುವ ದ್ವಂದ್ವಗಳನ್ನು ಅರ್ಜುನ ಪ್ರತಿನಿಧಿಸುತ್ತಾನೆ.<br /><br />ಇನ್ನು ದುರ್ಯೋಧನ ಅರ್ಜುನನ ಸ್ಥಾನದಲ್ಲಿದ್ದಿದ್ದರೆ ಅನ್ನುವ ಪ್ರಶ್ನೆಯೇ ಏಳುವುದಿಲ್ಲ. ಇಬ್ಬರೂ ಅದೇ ಸ್ಥಾನದಲ್ಲೇ ಇದ್ದಾರೆ, ಇಬ್ಬರೂ ಯುದ್ಧಭೂಮಿಯಲ್ಲೇ ಇದ್ದಾರೆ. ತುಮುಲ ದುರ್ಯೋಧನನಿಗೆ ಮಾತ್ರವಲ್ಲ ಭೀಮನಿಗೂ ಬರಲಿಲ್ಲ. ಭಾರತದ ಸೊಗಸೆಂದರೆ ಅದರ ಪಾತ್ರಪೋಷಣೆ. ಅದರ ಒಂದೊಂದು ಪಾತ್ರವೂ ಒಂದೊಂದು ಗುಣವನ್ನು ಪ್ರತಿನಿಧಿಸುತ್ತದೆ, ಒಂದೊಂದು ಮೌಲ್ಯವನ್ನೋ ಅಪಮೌಲ್ಯವನ್ನೋ ಎತ್ತಿಹಿಡಿಯುತ್ತದೆ. ಯುದ್ಧ ಈ ಮೌಲ್ಯಗಳ ತಾಕಲಾಟದ ಸಂಕೇತವಾಗಿಯೂ ಬರುತ್ತದೆ. ಆ ದೃಷ್ಟಿಯಿಂದ ದುರ್ಯೋಧನ ಅರ್ಜುನನಾಗಲು ಸಾಧ್ಯವೇ ಇಲ್ಲManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-6219880715879037434.post-6813719430167593352010-09-07T14:44:59.480+05:302010-09-07T14:44:59.480+05:30ನಮಸ್ಕಾರ ಮಂಜುನಾಥ್ ಅವರಿಗೆ
ಗೀತೆಯನ್ನು ಓದಿ ಅರ್ಥೈಸಿಕೊಳ್ಳ...ನಮಸ್ಕಾರ ಮಂಜುನಾಥ್ ಅವರಿಗೆ<br />ಗೀತೆಯನ್ನು ಓದಿ ಅರ್ಥೈಸಿಕೊಳ್ಳಬೇಕೆಂದು ಆಸೆ ಪಡುತ್ತಿರುವ ನನ್ನಂಥವರಿಗೆ ನಿಮ್ಮ ಈ ಬರಹಗಳು ತುಂಬಾ ಅನುಕೂಲಕರವಾಗಿವೆ. ನನಗೆ ತುಂಬಾ ಇಷ್ಟವಾಯಿತು. ನಿಮ್ಮಿಂದ ನಾನೂ ಸ್ವಲ್ಪ ಕಲಿಯುವ ಆಸೆ...... ಹೃತ್ಪೂರ್ವಕ ಧನ್ಯವಾದಗಳು...<br /><br />ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-6219880715879037434.post-71776163010809367282010-09-07T10:24:40.276+05:302010-09-07T10:24:40.276+05:30ಮಂಜುನಾಥ್ ಅವರೇ,
ನಮಸ್ಕಾರ.
ಬಾಯಾರಿ ಬಂದು ತಿಳಿನೀರ ಹಂಬಲ...ಮಂಜುನಾಥ್ ಅವರೇ,<br /><br />ನಮಸ್ಕಾರ.<br /><br />ಬಾಯಾರಿ ಬಂದು ತಿಳಿನೀರ ಹಂಬಲಿಸಿದವರಿಗೆ ಸಿಹಿ ಎಳನೀರ ಹಂಚುತ್ತಿರುವಿರಿ. ತುಂಬಾ ಸೊಗಸಾದ ವಿಶ್ಲೇಷಣೆ, ನಿರೂಪಣೆ.<br /><br />ಅರ್ಜುನನ ತುಮುಲ ಅವನು 'ನರ'ನಾದ್ದರಿಂದ ಅಲ್ಲವೇ? 'ನಾರಾಯಣನಿ'ಗೆ ಎಲ್ಲರೂ ಒಂದೇ, ಅವನಿಗೆ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ!<br />ಇನ್ನು ದುರ್ಯೋಧನ ಅರ್ಜುನನ ಸ್ಥಾನದಲ್ಲಿದ್ದಿದ್ದರೆ, ಅವನಿಗೆ ಈ ತುಮುಲವಿರುತ್ತಿತ್ತೆ? ಅವನಿಗೆ ಹದಿಹರೆಯದ ಪೋರ ಅಭಿಮನ್ಯುವನ್ನು ಕಂಡು ಮಮತೆಯುಕ್ಕಲಿಲ್ಲ, ಬದಲಿಗೆ ಸೇಡಿನ ಜ್ವಾಲೆ ಹೊತ್ತಿ ಉರಿಯಿತು.<br /><br />ನಾನಿನ್ನೂ ಭಗವದ್ಗೀತೆಯ ಹೊರ ಆವರಣವನ್ನು ಅರಿಯಲು ಯತ್ನಿಸುತ್ತಿರುವವಳು. ನೀವು ಬರೆದುದನ್ನು ಓದಿದಾಗ, ಅರೇ, ನನಗೂ ಹೀಗೇ ಅನ್ನಿಸಿತ್ತಲ್ಲವೇ ಈ ಭಾಗವನ್ನು ಓದಿದಾಗ ಎಂದೆನಿಸಿತು. ನಿಮ್ಮ ಬರವಣಿಗೆಯನ್ನು ಓದಿದಮೇಲೆ, ಗೀತೆಯನ್ನು ಇನ್ನೂ ಅರಿಯುವ, ಅಭ್ಯಾಸಿಸುವ ಸ್ಫೂರ್ತಿ! <br />ಗೀತೆಯ ಉಳಿದ ಭಾಗಗಳ ಬಗೆಗಿನ ನಿಮ್ಮ ವಿಶ್ಲೇಷಣೆಯನ್ನು ಕಾತುರದಿಂದ ಎದುರು ನೋಡುತ್ತಿದ್ದೇನೆ.<br /><br />ಧನ್ಯವಾದಗಳು,<br />ಶಾಮಲshaamalahttps://www.blogger.com/profile/17140084455377790146noreply@blogger.comtag:blogger.com,1999:blog-6219880715879037434.post-37277564356166881422010-08-14T16:55:55.650+05:302010-08-14T16:55:55.650+05:30ಲೇಖನದ ಬಗ್ಗೆ ಮಿತ್ರ ವಿವೇಕರ ಮಾತು:
===================...ಲೇಖನದ ಬಗ್ಗೆ ಮಿತ್ರ ವಿವೇಕರ ಮಾತು:<br />========================<br /><br />ಪ್ರಿಯ ಮಂಜು,<br /><br />ಬಹಳ ಸೊಗಸಾದ ಮತ್ತು ಅತ್ಯಂತ ಹೃದ್ಯವಾದ ಲೇಖನವಿದು. ಭಗವಾನ್ವ್ಯಾಸರ ದರ್ಶನವನ್ನು ನಿಮ್ಮ ಲೇಖನ ಬಿಡಿಸಿ ತೋರಿಸುತ್ತಿದೆ. ಈ ಕುರಿತು ನನ್ನ ವಿಚಾರದಲ್ಲಿ ಬಂದ ಕೆಲವು ಸಂಗತಿಗಳನ್ನು ನಿಮ್ಮೊಡನೆ ಹಂಚಿಕೊಂಡರೆ ನನಗೂ ಸಮಾಧಾನ.<br /><br /><br />ಇಡೀ ಮಹಾಭಾರತವನ್ನೇ ಸೂತ್ರರೂಪದಲ್ಲಿ ಸಂಗ್ರಹಮಾಡುವುದಿದ್ದರೆ, ಅದು ಭಗವದ್ಗೀತೆಯಲ್ಲಿಯೆ ಬಂದುಬಿಟ್ಟಿದೆ! "ಸ್ವಧರ್ಮೇ ನಿಧನಂ ಶ್ರೇಯಂ ಪರಧರ್ಮೋ ಭಯಾವಹ". ಅಲ್ಲವೇ? ಭಾರತದಾದ್ಯಂತ ಎಲ್ಲಿ ನೋಡಿದರೂ ಇದೇ ಸೂತ್ರವನ್ನು ಪ್ರತಿಪಾತ್ರವೂ ತನ್ನ ರೀತಿಯಲ್ಲಿ ವಿಸ್ತರಿಸಿತೋರಿಸುತ್ತದೆ. ಇವೆಲ್ಲದರ ಮಧ್ಯೆ ಶ್ರೀಕೃಷ್ಣನು ಶಾಶ್ವತಮೌಲ್ಯದ ಪ್ರತಿನಿಧಿಯಾಗಿ ಕಾಣುತ್ತಾನೆ. ಮತ್ತು ಅವನೇ ಈ ಸೂತ್ರವನ್ನೂ ಅದಕ್ಕೆ ಭಾಷ್ಯರೂಪವಾಗಿ ಗೀತೆಯನ್ನೂ ಬೋಧಿಸಿದ್ದಾನೆಂದು ನನ್ನ ನಂಬುಗೆ. <br /><br />ಚೋದ್ಯವೆಂದರೆ, ಶ್ರೀಕೃಷ್ಣನ-ವೇದವ್ಯಾಸರ ದರ್ಶನವು, ಅವರನ್ನು ಸಾಕ್ಷಾತ್ತಾಗಿ ನೋಡಿದ ಅಂದಿನ ಜನರಿಗೂ ತಿಳಿಯಲಿಲ್ಲ. ವ್ಯಾಸರಂತೂ ಕೊನೆಗೆ "ಊರ್ಧ್ವಬಾಹುರ್ವಿರೌಮ್ಯೇಷ......" ಎಂದು ತಮ್ಮ ಅಳಲನ್ನು ತೋಡಿಕೊಂಡರು. ಇದು ಯಾಕೆ ಹೀಗೆ? ಬಹುಷಃ ಮನುಷ್ಯನಲ್ಲಿರುವ ಮಹತ್ತ್ವಾಕಾಂಕ್ಷೆಯಿಂದ ಇದೆಲ್ಲ ರಾದ್ಧಾಂತವೆನ್ನಿಸುತ್ತದೆ. ಭಾರತವು ನಮಗೆ ಜೀವನಪ್ರೀತಿಯನ್ನು ಯಥೇಷ್ಟವಾಗಿ ಹೇಳಿಕೊಡುವಂತೆ, ಬರೀ ಅರ್ಥಕಾಮಮೋಹಿತರಾದ ಕೆಲವು ಜನರು ಈ ಮಹತ್ತ್ವಾಕಾಂಕ್ಷೆಯ ದೆಸೆಯಿಂದ ತಮ್ಮ ಇಷ್ಟಾರ್ಥಗಳನ್ನು ಹೇಗಾದರೂ ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆಂಬ ಎಚ್ಚರಿಕೆಯನ್ನೂ ನೀಡುತ್ತದೆ. ಹೀಗೆ ಲೋಭಿತರಾದವರ ಆಸ್ಥಾನದಲ್ಲಿ ಪಾಪ ವಿದುರನಂಥವರು ಹೇಗೆ ಉಳಿದಾರು? ಅಲ್ಲದೇ ಆದ್ಯಂತ ಕರ್ತವ್ಯಪರಾಯಣನಾದ ಅರ್ಜುನನಲ್ಲಲ್ಲದೇ ಈ ದ್ವಂದ್ವವು ಕೇವಲ ಫಲವ್ಯಾಮೋಹಿಗಳಾದ ಕೌರವರಲ್ಲಿ ಮೂಡಲು ಸಾಧ್ಯವೇ? ತಮ್ಮ ತಮ್ಮ ಮಟ್ಟದಲ್ಲಿ ಕರ್ತವ್ಯಚ್ಯುತರ; ಮತ್ತಿನ್ನೊಂದರ್ಥದಲ್ಲಿ ಮಹಾತ್ತ್ವಾಕಾಂಕ್ಷೆಯನ್ನು ಬೆಂಬತ್ತಿದ ಎಂಥೆಂಥವರಲ್ಲೂ ಅವರ ವ್ಯಕ್ತಿತ್ವದ ಉತ್ತಮಾಂಶಗಳನ್ನು ಮೀರಿ ಧರ್ಮಮೌಢ್ಯವು ಮೆರೆಯಿತೆಂದರೆ; ಮಾನವಸ್ವಭಾವಕ್ಕೆ ಎಣೆಯುಂಟೆ? <br /><br /><br />ಇದೆಲ್ಲವನ್ನೂ ಹಿಡಿದು ದರ್ಶನವನ್ನಾಗಿಸಿದ ವ್ಯಾಸರ ಭೌಮಪ್ರತಿಭೆಗೆ ಏನೆನ್ನೋಣ? ನಮಸ್ಕುರ್ಮೋ ಯಥಾಬಲಮ್.<br /><br />ಲೇಖನಕ್ಕೆ ತುಂಬಾ ಅಭಿನಂದನೆಗಳು. ಮತ್ತೆ ಇಂತಹ ವಿಚಾರಬೋಧಕ ಲೇಖನಗಳನ್ನು ಎದುರು ನೋಡುತ್ತಿದ್ದೇನೆ.<br /><br />ಧನ್ಯವಾದಗಳು,<br />ವಿವೇಕManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-6219880715879037434.post-57156160243325866742010-08-14T16:50:50.664+05:302010-08-14T16:50:50.664+05:30ಬಾಲು,
ಪ್ರತಿಕ್ರಿಯೆಗೆ ಧನ್ಯವಾದಗಳು. ದ್ರೌಪದೀವಸ್ತ್ರಾಪಹ...ಬಾಲು,<br /><br />ಪ್ರತಿಕ್ರಿಯೆಗೆ ಧನ್ಯವಾದಗಳು. ದ್ರೌಪದೀವಸ್ತ್ರಾಪಹರಣ ಖಂಡಿತಾ ಮಹಾಭಾರತದ ಕತೆಯೇ. In fact, ಅದೇ ಇಡೀ ಭಾರತದ ದುರಂತದ precipitation point ಅನ್ನಬಹುದು.<br /><br />ಭೈರಪ್ಪನವರ ಪರ್ವ ಆಗಲೀ ರನ್ನನ ಗದಾಯುದ್ಧವಾಗಲೀ ಭಾರತದ ಪುನಃಸೃಷ್ಟಿಯಲ್ಲ, ಅದರದೇ ಆದ agenda ಇಟ್ಟುಕೊಂಡು ಬರೆದ ಕೃತಿಗಳು. ತಮ್ಮ ಮೂಲ ಕಥಾಹಂದರಕ್ಕೆ (ಅಥವಾ ಕೇವಲ ಕತೆಯ ಬುನಾದಿಗಷ್ಟೇ) ಭಾರತವನ್ನಾಧರಿಸಿವೆಯೇ ಹೊರತು ಕತೆಯ ಬೆಳವಣಿಗೆ, ನಿರೂಪಣೆ, ಪಾತ್ರ ಸೃಷ್ಟಿ ಪೋಷಣೆಯ ದೃಷ್ಟಿಯಲ್ಲಿ ಅವಷ್ಟಕ್ಕೇ ಅವು ಸ್ವತಂತ್ರ ಕೃತಿಗಳು. ಆದ್ದರಿಂದ ಕತೆಯ authenticityಯ ದೃಷ್ಟಿಯಿಂದ ಅವುಗಳನ್ನು ಮೂಲ ಮಹಾಭಾರತಕ್ಕೆ ಹೋಲಿಸುವುದು ಸಾಧುವಲ್ಲ. ಪರ್ವವಾಗಲೀ ಗದಾಯುದ್ಧವಾಗಲಿ ಮಹಾಭಾರತವಲ್ಲ. ಭೈರಪ್ಪನವರ ಕೃಷ್ಣ ಮಹಾಭಾರತದ ಕೃಷ್ಣನಲ್ಲ; ರನ್ನನ ದುರ್ಯೋಧನ ಮಹಾಭಾರತದ ದುರ್ಯೋಧನ ಖಂಡಿತ ಅಲ್ಲ.<br /><br />ಪ್ರಾಸಂಗಿಕವಾಗಿ ಅರ್ಜುನನ ತುಮುಲವನ್ನು ಚಿತ್ರಿಸುವಾಗ ಅಂಥದ್ದೇ ತುಮುಲ ರನ್ನನ ದುರ್ಯೋಧನನಲ್ಲಿ ಕಂಡಿದ್ದು ನೆನಪಿಗೆ ಬಂತಷ್ಟೇ, ಆದರೆ ಅದು ಭಾರತದ ದುರ್ಯೋಧನನ ಚಿತ್ರಣವಲ್ಲ.<br /><br />ಅರ್ಜುನ ಬಾಣ ಹೊಡೆಯುವಂತೆ ಮಾಡಲು ನೂರೆಂಟು ಕಾರಣ ಕೊಡುವ ಕೃಷ್ಣನ "ಕಿಲಾಡಿ"ತನ ಇಡೀ ಕೃಷ್ಣತ್ವದ ಒಂದು ಪದರವಷ್ಟೇ. ಆದರೆ ಅದರ ಉಳಿದ ಪದರಗಳನ್ನು ಒಂದೊಂದೇ ಬಿಡಿಸುತ್ತಾ ಹೋದಂತೆ ಗೀತೋಪದೇಶದ ತಾತ್ತ್ವಿಕ, ರಾಜನೈತಿಕ, ಅಧ್ಯಾತ್ಮಿಕ ಆಯಾಮಗಳು ಕಣ್ಣಮುಂದೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಅದೇ ವಿಶ್ವರೂಪದರ್ಶನ. ಮುಂದೆ ಓದಲು, ಬರೆಯಲು ನಾನೂ ಸಾಕಷ್ಟು ಉತ್ಸುಕನಾಗಿದ್ದೇನೆ.<br /><br />ನಿಮ್ಮ ಪ್ರೋತ್ಸಾಹಕ್ಕೆ ನನ್ನಿ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-6219880715879037434.post-14708924098736420912010-08-11T13:10:13.583+05:302010-08-11T13:10:13.583+05:30ಮೊದಲು ಬರವಣಿಗೆಗೆ ದನ್ಯವಾದಗಳು.
ನೀವು ಹೇಳಿದ ಹಾಗೆ ನನಗೆ...ಮೊದಲು ಬರವಣಿಗೆಗೆ ದನ್ಯವಾದಗಳು. <br /><br />ನೀವು ಹೇಳಿದ ಹಾಗೆ ನನಗೆ ಕೌರವನ ಕೊನೆಯ ಮಾತುಗಳು ಬಹಳ ಇಷ್ಟ. ಯುದ್ದ ದಲ್ಲಿ ಎಲ್ಲರನ್ನು ಕಳೆದು ಕೊಂದ ಅವನು, ತಾನು ಅಲ್ಲಿಯೇ ಸಾವನ್ನು ಕಾಣಬೇಕಿದೆ, ಸಂದಾನ ಮಾಡಿಕೊಂಡು ಪ್ರಯೋಜನವೇನು? ಪ್ರಿಯರನ್ನು ಕಳೆದುಕೊಂಡು ರಾಜ್ಯ ಇಟ್ಟುಕೊಂಡು ಮಾಡುವುದೇನಿದೆ?. ಎಷ್ಟು ಸತ್ಯ ಅಲ್ಲವ?<br /><br />ಗೀತೋಪದೇಶ ಮಾಡಿದ ಕೃಷ್ಣ ಬಹಳ ಕಿಲಾಡಿ, ಅರ್ಜುನನಿಗೆ ಬಾಣ ಹೂಡು ಎಂದು ಅದಕ್ಕೆ ಸಕಾರಣ ಗಳನ್ನು ಕೊಡುತ್ತಾನೆ. ನಮ್ಮ ಭಾಷೆಯಲ್ಲಿ ಹೇಳಬೇಕು ಎಂದರೆ ಒಳ್ಳೆಯ councelling ಮಾಡುತ್ತಾನೆ. :) :)<br /><br />ಆದರೆ ನನಗೆ ಒಂದು ಸಂದೇಹವಿದೆ. ಭೈರಪ್ಪ ನವರ ಪರ್ವ ದಲ್ಲಿ ದ್ರೌಪದಿ ವಸ್ತ್ರಾಪ ಹಾರ ಪ್ರಕರಣ ಇಲ್ಲ. ಅದು ವ್ಯಾಸ ವಿರಚಿತ ಭಾರತದಲ್ಲಿ ಇದೆಯೇ? ವ್ಯಾಸ ಭಾರತವನ್ನು ನಾನು ಓದಿಲ್ಲವಾದ್ದರಿಂದ ನಂಗೆ ಗೊತ್ತಿಲ್ಲ.ಬಾಲುhttps://www.blogger.com/profile/14692063966558914325noreply@blogger.com